ಕರವ ಮುಗಿದ ಮುಖ್ಯಪ್ರಾಣ
ರಚನೆಕಾರ: ಪುರಂದರದಾಸರು
ಗಾಯನ: ಸೌಜನ್ಯ
ವರ್ಗ: ಹನುಮಂತ
ಕರವ ಮುಗಿದ ಮುಖ್ಯಪ್ರಾಣ || ಪ ||
ಕರವ ಮುಗಿದ ಶ್ರೀ ಹರಿಯೇ ಎದುರಾಗಿ |
ದುರುಳರ ಸದೆದು ಸಜ್ಜನರ ಪೊರೆಯೆಂದು || ಅ.ಪ ||
ಜೀವೇಶರೈಕ್ಯವು ಜಗತ್ತು ಮಿಥ್ಯವೆಂದು |
ಈ ವಿಧ ಪೇಳುವ ಮಾಯಿಗಳಳಿಯೆಂದು || ೧ ||
ಇಲ್ಲಿ ಮಾತ್ರ ಭೇದ, ಅಲ್ಲಿ ಒಂದೇ ಎಂಬ |
ಕ್ಷುಲ್ಲಕರನು ಪಿಡಿದು ಹಲ್ಲು ಮುರಿಯೆಂದು || ೨ ||
ತಾರತಮ್ಯ ಪಂಚಭೇದ ಸತ್ಯವೆಂಬ |
ಮಾರುತಿಮತ ಪೊಂದಿದವರನು ಸಲಹೆಂದು || ೩ ||
ಪರಿಪರಿ ಭಕ್ತರ ಹೃದಯದಲ್ಲಿ ನಿಂದು |
ನಿರತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು || ೪ ||
ಹರಿ ಮಾಡೋ ವ್ಯಾಪಾರ ಬಲ್ಲ ಕಾರಣನಾಗಿ |
ಪುರಂದರವಿಠಲನ ಚರಣಕ್ಕೆರಗಿ ನಿಂದು || ೫ ||
ಕರವ ಮುಗಿದ ಶ್ರೀ ಹರಿಯೇ ಎದುರಾಗಿ |
ದುರುಳರ ಸದೆದು ಸಜ್ಜನರ ಪೊರೆಯೆಂದು || ಅ.ಪ ||
ಜೀವೇಶರೈಕ್ಯವು ಜಗತ್ತು ಮಿಥ್ಯವೆಂದು |
ಈ ವಿಧ ಪೇಳುವ ಮಾಯಿಗಳಳಿಯೆಂದು || ೧ ||
ಇಲ್ಲಿ ಮಾತ್ರ ಭೇದ, ಅಲ್ಲಿ ಒಂದೇ ಎಂಬ |
ಕ್ಷುಲ್ಲಕರನು ಪಿಡಿದು ಹಲ್ಲು ಮುರಿಯೆಂದು || ೨ ||
ತಾರತಮ್ಯ ಪಂಚಭೇದ ಸತ್ಯವೆಂಬ |
ಮಾರುತಿಮತ ಪೊಂದಿದವರನು ಸಲಹೆಂದು || ೩ ||
ಪರಿಪರಿ ಭಕ್ತರ ಹೃದಯದಲ್ಲಿ ನಿಂದು |
ನಿರತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು || ೪ ||
ಹರಿ ಮಾಡೋ ವ್ಯಾಪಾರ ಬಲ್ಲ ಕಾರಣನಾಗಿ |
ಪುರಂದರವಿಠಲನ ಚರಣಕ್ಕೆರಗಿ ನಿಂದು || ೫ ||