ಶ್ರೀನಿವಾಸ ನೀನೇ ಪಾಲಿಸೋ
ರಚನೆಕಾರ: ಪುರಂದರದಾಸರು
ಗಾಯನ: ಶಶಿಕಾಂತ ರಾವ್
ವರ್ಗ: ಶ್ರೀನಿವಾಸ
ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೇ || ಪ ||
ಧ್ಯಾನ ಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಪ
ವೇಣುಗೋಪಾಲ ಗೋವಿಂದ ವೇದವೇದಾಂತ ನಿತ್ಯಾನಂದ || ಅ.ಪ ||
ಎಂದಿಗೆ ನಿನ್ನ ಪಾದಾಬ್ಜವ ಪುಂದುವ ಸುಖ
ಎಂದಿಗೆ ಲಭ್ಯವೋ ಮಾಧವ |
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನು
ಅಂದದಿಂ ಭವಾಬ್ಧಿಯೊಳು ನಿಂದು ನೊಂದೆನೋ ಮುಕುಂದ || ೧ ||
ಎಷ್ಟು ದಿನ ಕಷ್ಟಪಡುವುದೊ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ |
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೋ ಇಷ್ಟನಾಗಿ ಕೈಯ ಪಿಡಿದು || ೨ ||
ಅನುದಿನ ಅನೇಕ ರೋಗಂಗಳ ಅನುಭವಿಸಿದೆನು
ಘನ ಮಹಿಮ ನೀನೆ ಕೇಳಯ್ಯ |
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹೆನ್ನ
ಹನುಮದೀಶ ಪುರಂದರ ವಿಠಲನೇ ಕೈಯ ಪಿಡಿದು || ೩ ||
ಗಾನಲೋಲ ಶ್ರೀ ಮುಕುಂದನೇ || ಪ ||
ಧ್ಯಾನ ಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಪ
ವೇಣುಗೋಪಾಲ ಗೋವಿಂದ ವೇದವೇದಾಂತ ನಿತ್ಯಾನಂದ || ಅ.ಪ ||
ಎಂದಿಗೆ ನಿನ್ನ ಪಾದಾಬ್ಜವ ಪುಂದುವ ಸುಖ
ಎಂದಿಗೆ ಲಭ್ಯವೋ ಮಾಧವ |
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನು
ಅಂದದಿಂ ಭವಾಬ್ಧಿಯೊಳು ನಿಂದು ನೊಂದೆನೋ ಮುಕುಂದ || ೧ ||
ಎಷ್ಟು ದಿನ ಕಷ್ಟಪಡುವುದೊ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ |
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೋ ಇಷ್ಟನಾಗಿ ಕೈಯ ಪಿಡಿದು || ೨ ||
ಅನುದಿನ ಅನೇಕ ರೋಗಂಗಳ ಅನುಭವಿಸಿದೆನು
ಘನ ಮಹಿಮ ನೀನೆ ಕೇಳಯ್ಯ |
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹೆನ್ನ
ಹನುಮದೀಶ ಪುರಂದರ ವಿಠಲನೇ ಕೈಯ ಪಿಡಿದು || ೩ ||